ದಿನೇಶ್ ಅಮ್ಮಣ್ಣಾಯ, ಗಿರೀಶ್ ರೈ ಅವರಿಗೆ ಇರಾದಲ್ಲಿ ಸಮ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜುಲೈ 14 , 2015
|
ಜುಲೈ 14, 2015
|
ದಿನೇಶ್ ಅಮ್ಮಣ್ಣಾಯ, ಗಿರೀಶ್ ರೈ ಅವರಿಗೆ ಇರಾದಲ್ಲಿ ಸಮ್ಮಾನ
ಮಂಗಳೂರು :
ಯಕ್ಷಗಾನದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಹಾಗೂ ಯುವ ಭಾಗವತ ಗಿರೀಶ್ ರೈ ಕಕ್ಕೆಪದವು ಅವರನ್ನು ಯಕ್ಷಮಿತ್ರರು ಇರಾ ಬಳಗದ ವತಿಯಿಂದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆದ ಯಕ್ಷಗಾನದ ಸಂದರ್ಭ ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ದಿನೇಶ್ ಅಮ್ಮಣ್ಣಾಯ ಅವರು, ಯಕ್ಷಗಾನ ಹಲವಾರು ಮಜಲುಗಳನ್ನು ಮೀರಿ ಇಂದು ಹೊಸ ರೂಪದಲ್ಲಿ ಪ್ರಭೆಯಾಗಿ ಕಂಗೊಳಿಸುತ್ತಿದೆ. ಇರಾ ಮಣ್ಣಿನ ಮೂಲಕ ನನ್ನ ಯಕ್ಷಗಾನ ಲೋಕಕ್ಕೆ ಹೊಸ ಬೆಳಕು ದೊರಕಿದ್ದು, ಹಲವಾರು ಯಕ್ಷ ಸಾಧಕರಿಗೆ ಇರಾ ದಾರಿದೀಪವಾಗಿದೆ ಎಂದರು.
ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ರೈ ಬೋಳಾÂರ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಹಿಂದಿನ ಯಕ್ಷಗಾನ ದಿನಗಳನ್ನು ಜ್ಞಾಪಿಸುವ ಮೂಲಕ, ಹೊಸ ಪೀಳಿಗೆಗೆ ಯಕ್ಷಗಾನದ ರೂಪವನ್ನು ಸಾಕ್ಷಾತ್ಕರಿಸುವ ಕಾರ್ಯ ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಪ್ರಗತಿಪರ ಕೃಷಿಕ ಅಲ್ಕಿàರು ಜಯರಾಮ ರಾವ್ ಅಧ್ಯಕ್ಷತೆ ವಹಿಸಿದ್ದರು. ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ಉದ್ಯಮಿ ಸಂಜೀವ ಪೂಜಾರಿ, ಕಲ್ಲಾಡಿ ದಿ | ವಿಠಲ ಶೆಟ್ಟಿ ಸೇವಾ ಟ್ರಸ್ಟ್ಅಧ್ಯಕ್ಷ ಜಗದೀಶ್ ಶೆಟ್ಟಿ ಇರಾಗುತ್ತು ಅತಿಥಿಗಳಾಗಿದ್ದರು. ರಾಜಶೇಖರ್ ರೈ ಇರಾಗುತ್ತು, ಪ್ರವೀಣ್ ಶೆಟ್ಟಿ ಸಂಪಿಲ ಮುಂತಾದವರು ಉಪಸ್ಥಿತರಿದ್ದರು.
ಚಂದ್ರಹಾಸ್ ಶೆಟ್ಟಿ ಸಂಪಿಲ ಸ್ವಾಗತಿಸಿದರು. ಸುಕೇಶ್ ಭಂಡಾರಿ ಕಿನ್ನಿಮಜಲು ಬೀಡು ವಂದಿಸಿದರು. ಪುಷ್ಪರಾಜ್ ಕುಕ್ಕಾಜೆ ಸಮ್ಮಾನಿತರ ಪರಿಚಯ ಮಾಡಿದರು. ಯತಿರಾಜ್ ಶೆಟ್ಟಿ ಸಂಪಿಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬಪ್ಪನಾಡು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ "ಬನತ ಬಂಗಾರ್' ಯಕ್ಷಗಾನ ಪ್ರದರ್ಶನವಾಯಿತು.
ಕೃಪೆ :
udayavani
|
|
|